ಉರುಳಿರುವ ತಾರೆಗಳು

ಉರುಳಿರುವ ತಾರೆಗಳಿಗಳುತ ನಿಲ್ಲುವರುಂಟೆ?
ಮೂಡಿರಲು ಮೂಡಲಲಿ ಉದಯದರಳಿನ ಕಂಪು
ಕಳೆದ ಕಾಲದ ತಂಟೆ
ಇಂದೇಕೆ? – ಹೊಸ ತಂಪು

ಹೃದಯದೊಳಗರಳಿರಲು, ಕಂಪು ಸವಿವುದಬಿಟ್ಟು
ಅಳಿದ ಕನಸುಗಳನ್ನು-ಸತ್ವವಿಲ್ಲದ ಹೊಟ್ಟು
ಅದು ಎಂಬುದನೆ
ನೀ ನಂಬದೆಯೆ
ಮೊಗೆಮೊಗೆದು
ಮೇಲೆಸೆದು
ಆನಂದ ಪಡಲೆಂದು
ಚಿಂತಿಸುತ ನೀನಿಂದು
ಎಲ್ಲ ಮಣ್ಗೂಡಿಸಿಹೆ
-ಕಾಲ ಸಾಗುತ್ತಲಿದೆ!

ಕಾಲಜೇಡನು ನೇದ ಬಲೆಯು ಜೀವದ ಗೋರಿ
ಅದರ ಗರ್ಭದಲಿಹುದು ಮತ್ತೆ ಹಿಂತಿರುಗುವುದೆ?
ನಿನ್ನ ಕೊಚ್ಚೆಯ ಮೋರಿ
ಅಲ್ಲಿ ಮುತ್ತರಸುವುದೆ?

ಅಂತಾದರೂ ಇಂದು ಪ್ರೇಮದೆದೆ ಬಳ್ಳಿಯಲಿ
ನಿನ್ನ ಜೀವನವರಳೀ, ಹೃದಯದಾನಂದದುಲಿ
ಹೊರಹೊಮ್ಮುತಿರೆ
ಸುಖ ನಿನ್ನುಸಿರೆ
ಆಗುತಿರೆ
ಅದನೆ ನೆರೆ
ಮರೆತು ಕಳೆದುದ ನೆನೆದು
ದುಗುಡದೊಳಗಿಳಿದಿಳಿದು
ಎಲ್ಲ ಮಣ್ಗೂಡಿಸಿಹೆ
-ಕಾಲ ಸಾಗುತ್ತಲಿದೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಯತ್ನ
Next post ನಿರೀಕ್ಷೆಯ ಮಮ್ಮಿಗಳು

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

cheap jordans|wholesale air max|wholesale jordans|wholesale jewelry|wholesale jerseys